ಪರಶುರಾಮ ಬಿ. ದಲಬಂಜನ ನಿರ್ಮಿಸಿರುವ ‘ದ್ರೋಹಿ’ ಚಿತ್ರ ಜೂನ್ನಲ್ಲಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರದ ಹಾಡುಗಳ ಸಿಡಿ ಬಿಡುಗಡೆಯಾಗಲಿದೆ. 15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಎಸ್. ಕಮ್ಮಾರ್ ಅವರು ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಹುಬ್ಬಳ್ಳಿ ಧಾರವಾಡ ಸುತ್ತಮುತ್ತ 40 ದಿನಗಳ ಚಿತ್ರೀಕರಣ ನಡೆದಿದೆ.
ಪರಶುರಾಮ ಅವರೇ ಚಿತ್ರಕಥೆಯನ್ನೂ ಬರೆದಿದ್ದಾರೆ. ಎಂ. ವಿಜಯಕುಮಾರ್ ಸಂಗೀತವಿರುವ ಈ ಚಿತ್ರಕ್ಕೆ ಶಿವಶರಣು ಸಿಗ್ನಳ್ಳಿ ಅವರ ಛಾಯಾಗ್ರಹಣವಿದೆ. ಬಸವರಾಜ ನಂದಗಡ ಸಂಕಲನ, ಜಸ್ವಂತ ಜಾದವ ಸಾಹಸ ನಿರ್ದೇಶನ, ಪ್ರಶಾಂತ್, ಜಾಕ್ ರೋಹಿತ್, ಸಂದೀಪ ನೃತ್ಯ ನಿರ್ದೇಶನವಿದೆ. ಪ್ರಕಾಶ್ ಕಮ್ಮಾರ, ರಘು ರೂಗಿ ಗೀತಸಾಹಿತ್ಯ ರಚಿಸಿದ್ದಾರೆ. ಜಸ್ವಂತ ಜಾದವ್, ಪ್ರಕಾಶ್, ನಾಯಕ್, ಅಮೃತಾಶ್ರೀ (ಗಾಯತ್ರಿ), ಸುನೀತಾ ಕಾಟವೆ, ಯಮನೂರ ಜಾದವ ಇತರರು ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.