ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಂಡುಪಾಳ್ಯ ಗ್ಯಾಂಗ್ನ 11 ಮಂದಿ ಸದಸ್ಯರು ಶುಕ್ರವಾರ ಬಿಡುಗಡೆಯಾಗಲಿರುವ ‘ದಂಡುಪಾಳ್ಯ–2’ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಊಟ–ತಿಂಡಿ ತ್ಯಜಿಸಿ ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
‘ದಂಡುಪಾಳ್ಯ–2 ಚಲನಚಿತ್ರ ಬಿಡುಗಡೆ ಕುರಿತು ಮಾಧ್ಯಮದಲ್ಲಿ ನೋಡಿ ಅವರು ತಿಳಿದುಕೊಂಡಿದ್ದಾರೆ. ಆ ಚಲನಚಿತ್ರದಲ್ಲಿ ನಮ್ಮನ್ನು ಕೆಟ್ಟದಾಗಿ ವೈಭವೀಕರಿಸಿ ಬಿಂಬಿಸಲಾಗಿದೆ ಎಂದು ಗೊತ್ತಾಗಿದೆ.
ಅನವಶ್ಯಕವಾಗಿ ನಮ್ಮನ್ನು ನಿಂದಿಸಲಾಗುತ್ತಿದೆ. ಸಮಾಜದ ದೃಷ್ಟಿಯಲ್ಲಿ ನಮ್ಮನ್ನು ಕ್ರೂರಿಗಳಂತೆ ತೋರಿಸಲಾಗುತ್ತಿದೆ. ಇದು ಸರಿಯಲ್ಲ. ಚಲನಚಿತ್ರ ತೆರೆ ಕಂಡಲ್ಲಿ ಊಟ, ತಿಂಡಿ ತ್ಯಜಿಸುತ್ತೇವೆ’ ಎಂದು ದಂಡುಪಾಳ್ಯ ಗ್ಯಾಂಗ್ನವರು ಇದೇ 10ರಂದು ಮನವಿ ಕೊಟ್ಟಿದ್ದರು.
ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಚಿತ್ರ ತಂಡದ ವಕೀಲರೂ, ಮಾತುಕತೆ ನಡೆಸಿದ್ದಾರೆ. ಹೀಗಾಗಿ, ಯಾರೂ ಪ್ರತಿಭಟನೆ ನಡೆಸಿಲ್ಲ’ ಎಂದು ಕಾರಾಗೃಹ ಅಧೀಕ್ಷಕ ಟಿ.ಪಿ. ಶೇಷ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.