ADVERTISEMENT

ನಿಗೂಢ ‘ಕಾಫಿ ತೋಟ’

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 5:45 IST
Last Updated 7 ಆಗಸ್ಟ್ 2017, 5:45 IST
ನಿಗೂಢ ‘ಕಾಫಿ ತೋಟ’
ನಿಗೂಢ ‘ಕಾಫಿ ತೋಟ’   

ಬೆಂಗಳೂರು: ಟಿ.ಎನ್.ಸೀತಾರಾಮ್ ನಿರ್ದೇಶನದ ಕಾಫಿ ತೋಟ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಕೊಲೆ ಹಾಗೂ ಅದರ ನಿಗೂಢತೆ ಚಿತ್ರದ ಕಥಾ ಎಳೆಯಾಗಿರುವುದನ್ನು ಟ್ರೇಲರ್‌ ಹೇಳುವಂತಿದೆ.

ಪ್ರಸ್ತುತ ಚಿತ್ರರಂಗದಲ್ಲಿ ಥ್ರಿಲ್ಲರ್‌ ಕಥೆಗಳಿಗೆ ಬೇಡಿಕೆಯಿದ್ದು, ಕಾಫಿ ತೋಟ ಕೂಡ ಅಂಥದ್ದೇ ಕಥೆಯನ್ನು ಒಳಗೊಂಡಿದೆ. ಎಲ್ಲಿಯೋ ನಡೆಯುವ ಕೊಲೆ, ಪ್ರಕರಣದಲ್ಲಿ ಸಿಲುಕುವ ಮುಗ್ದರು, ಆಸ್ತಿಗಾಗಿ ಹೊಂಚು ಹಾಕಿರುವ ಮತ್ತೊಬ್ಬರು, ನಡುವೆ ಅರಳಿ ಚಿಗುರುವ ಪ್ರೀತಿ,..ಹೀಗೆ ಟ್ರೇಲರ್ ವೀಕ್ಷಕರಿಗೆ ಕುತೂಹಲ ಕೆರಳಿಸಲು ಅಗತ್ಯವಿರುವ ಎಲ್ಲ  ಆಯಾಮಗಳನ್ನು ತೆರೆದಿಟ್ಟಿದೆ.

ಮಲೆನಾಡು, ಕಡಲ ಕಿನಾರೆ, ತೋಟದಲ್ಲಿ ನಡೆಯುವ ಕಥೆಯು ದೃಶ್ಯದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶಕ ಸೀತಾರಾಮ್‌ ಮತ್ತೆ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಕೊಲೆಯ ಪ್ರಕರಣದ ವಿಚಾರಣೆ ನಡೆಯುವ ಕೋರ್ಟ್‌, ಪೊಲೀಸ್‌ ಠಾಣೆ ಟಿಎನ್‌ಎಸ್‌ ಅವರ ಎಂದಿನ ಶೈಲಿಯನ್ನು ನೆನಪಿಸುತ್ತದೆ.

ADVERTISEMENT

ಅಶೋಕ್‌ ಕಶ್ಯಪ್‌ ಛಾಯಾಗ್ರಹಣ, ಅನೂಪ್‌ ಸಿಳಿನ್‌ ಹಾಗೂ ಮಿದುನ್‌ ಮುಕುಂದನ್‌ ಸಂಗೀತವಿದೆ. ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತಾ ಹೊರನಾಡು, ಬಿ.ಸಿ.ಪಾಟೀಲ್, ಸುಧಾ ಬೆಳವಾಡಿ, ವೀಣಾಸುಂದರ್‌, ಸುಂದರ್‌ ರಾಜ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.