ADVERTISEMENT

'ಪದ್ಮಾವತಿ' ಪ್ರದರ್ಶನಗೊಳ್ಳುವ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚಿ ಎಂದ ಬಿಜೆಪಿ ಶಾಸಕ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 3:33 IST
Last Updated 8 ನವೆಂಬರ್ 2017, 3:33 IST
'ಪದ್ಮಾವತಿ' ಪ್ರದರ್ಶನಗೊಳ್ಳುವ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚಿ ಎಂದ ಬಿಜೆಪಿ ಶಾಸಕ
'ಪದ್ಮಾವತಿ' ಪ್ರದರ್ಶನಗೊಳ್ಳುವ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚಿ ಎಂದ ಬಿಜೆಪಿ ಶಾಸಕ   

ಹೈದರಾಬಾದ್: ಮುಂದಿನ ತಿಂಗಳು ತೆರೆಕಾಣಲು ಸಿದ್ಧವಾಗುತ್ತಿರುವ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ ಪದ್ಮಾವತಿಯನ್ನು ತೆಲಂಗಾಣದಲ್ಲಿ ಪ್ರದರ್ಶಿಸಿದರೆ, ಆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ತೆಲಂಗಾಣ ಶಾಸಕ ಟಿ. ರಾಜಾ ಸಿಂಗ್ ಬೆದರಿಕೆಯೊಡ್ಡಿದ್ದಾರೆ.

ರಜಪೂತರನ್ನು ಸಿನಿಮಾದಲ್ಲಿ ಅವಮಾನಿಸಲಾಗಿದೆ. ಹಾಗಾಗಿ ಈ ಸಿನಿಮಾವನ್ನು ಪ್ರೇಕ್ಷಕರು ಬಹಿಷ್ಕರಿಸಬೇಕು ಎಂದು  ರಾಜಾ ಸಿಂಗ್ ಕರೆನೀಡಿದ್ದಾರೆ.

ಅಷ್ಟೇ ಅಲ್ಲದೆ ಒಂದು ವೇಳೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ಯುವಕರು ಬಂಧಿಯಾದರೆ ಅವರಿಗೆ ಜಾಮೀನು ನೀಡಿ ಬಂಧಮುಕ್ತಗೊಳಿಸುವುದಾಗಿ ರಾಜಾ ಹೇಳಿದ್ದಾರೆ.

ADVERTISEMENT

ದೀಪಿಕಾ ಪಡುಕೋಣೆ, ಶಾಹೀದ್ ಕಪೂರ್ ಮತ್ತು ರಣ್‍ವೀರ್ ಸಿಂಗ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಪದ್ಮಾವತಿ ಡಿಸೆಂಬರ್ 1 ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.