ಹೈದರಾಬಾದ್: ಎಸ್.ರಾಜ್ಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಹುಬಲಿ–2’ ಚಿತ್ರ ಏ.28ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ₹1000 ಕೋಟಿಗೂ ಅಧಿಕ ಹಣ ಗಳಿಸಿದ ಮೊದಲ ಭಾರತದ ಸಿನಿಮಾ ಎಂಬ ಪ್ರಖ್ಯಾತಿಗೆ ಪಾತ್ರವಾಗಿದೆ. ಜತೆಗೆ, ನಟ ಪ್ರಭಾಸ್ ಅವರು ಇತರ ಪ್ರಚಾರ ರಾಯಭಾರಿಯಾಗಲು ಇದ್ದ ಬಹುಬೇಡಿಕೆಯನ್ನು ತಳ್ಳಹಾಕಿ, ಚಿತ್ರದ ಬಗ್ಗೆ ತಮಗಿದ್ದ ಬದ್ಧತೆ ಮೆರೆದಿದ್ದಾರೆ.
ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ಪ್ರಭಾಸ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿದ್ದಾರೆ.
ಪ್ರಭಾಸ್ ಬಾಹುಬಲಿ ಚಿತ್ರಕ್ಕಾಗಿ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಬಾಹುಬಲಿ ಮೊದಲ ಬಾಗ ಬಿಡುಗಡೆಯಾದ ಬಳಿಕ ಜಾಹೀರಾತು ಅವಕಾಶಗಳು ಹೆಚ್ಚು ಬರಲಾರಂಭಿಸಿದವು.
ಬಾಹುಬಲಿ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿರುವ ಪ್ರಭಾಸ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಳ್ಳಲು ಹಲವು ಬಟ್ಟೆ, ಶೂ, ಫಿಟ್ನೆಸ್ ಉತ್ಪಾದಕ ಕಂಪೆನಿಗಳು ಆಸಕ್ತಿ ತೋರಿಸಿ, ಒಟ್ಟು ₹18 ಕೋಟಿ ಮೊತ್ತದ ಜಾಹೀರಾತು ಒಪ್ಪಂದಕ್ಕೆ ಕೇಳಿಕೊಂಡಿದ್ದವು. ಆದರೆ, ಪ್ರಭಾಸ್ ಈ ಯಾವುದೇ ಒಪ್ಪಂದಕ್ಕೂ ಸಹಿ ಹಾಕಿರಲಿಲ್ಲ.
ಇತ್ತೀಚೆಗೆ ನಿರ್ದೇಶಕ ರಾಜ್ಮೌಳಿ ಅವರು ಬಾಹುಬಲಿ ಚಿತ್ರಕ್ಕೆ ಸಂಬಂಧಿಸಿದಂತೆ ನಟ ಪ್ರಭಾಸ್ ಅವರ ಬದ್ಧತೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.