ಎಸ್. ನಾರಾಯಣ್ ನಿರ್ದೇಶನದಲ್ಲಿ ರಾಕ್ಲೈನ್ ವೆಂಕಟೇಶ್ ಹಾಗೂ ಆಕಾಶ್ ಚಾವ್ಲಾ ನಿರ್ಮಿಸಿರುವ ‘ಮನಸು ಮಲ್ಲಿಗೆ’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣಪತ್ರ ನೀಡಿದೆ. ಮಾರ್ಚ್ ಅಂತ್ಯದಲ್ಲಿ ಚಿತ್ರವು ತೆರೆಗೆ ಬರಲು ಸಿದ್ಧವಾಗಿದೆ.
ಮರಾಠಿಯ ಹಿಟ್ ‘ಸೈರಾಟ್’ ರಿಮೇಕ್ ಆಗಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ಖಳನಟ ಸತ್ಯಪ್ರಕಾಶ್ ಅವರ ಪುತ್ರ ನಿಶಾಂತ್ ನಾಯಕನಾಗಿ ಅಭಿನಯಿಸಿದ್ದಾರೆ. ಮೂಲ ಚಿತ್ರದ ಬೆಡಗಿ ರಿಂಕು ರಾಜಗುರು ಅವರನ್ನು ಕನ್ನಡ ಅವತರಣಿಕೆಗೂ ತಂದಿರುವುದು ವಿಶೇಷ. ಚಿತ್ರಕ್ಕೆ ಮನೋಹರ ಜೋಷಿ ಛಾಯಾಗ್ರಹಣ ಮತ್ತು ಅಜಯ್ ಅತುಲ್ ಸಂಗೀತ ನಿರ್ದೇಶನವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.