ADVERTISEMENT

ಚಿನ್ನದ ಪದಕದ ನಿರೀಕ್ಷೆಯಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2014, 19:30 IST
Last Updated 27 ಜುಲೈ 2014, 19:30 IST
ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕೂಟದ ಹಾಕಿ ಟೂರ್ನಿಯಲ್ಲಿ ವೇಲ್ಸ್‌ ವಿರುದ್ಧದ ಪಂದ್ಯದಲ್ಲಿ ಭಾರತದ ವಿ.ಆರ್‌. ರಘುನಾಥ್‌ (ಎಡಬದಿ) ಆಟದ ವೈಖರಿ 	–ಎಎಫ್‌ಪಿ ಚಿತ್ರ
ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕೂಟದ ಹಾಕಿ ಟೂರ್ನಿಯಲ್ಲಿ ವೇಲ್ಸ್‌ ವಿರುದ್ಧದ ಪಂದ್ಯದಲ್ಲಿ ಭಾರತದ ವಿ.ಆರ್‌. ರಘುನಾಥ್‌ (ಎಡಬದಿ) ಆಟದ ವೈಖರಿ –ಎಎಫ್‌ಪಿ ಚಿತ್ರ   

ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡ ತನ್ನ ಸವಾಲು ಒಡ್ಡಿದೆ.  ಭಾರತ ಇಲ್ಲಿ ‘ಎ’ ಗುಂಪಿನಲ್ಲಿದೆ. ತನ್ನ ಗುಂಪಿನಲ್ಲಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ವೇಲ್ಸ್‌, ಸ್ಕಾಟ್ಲೆಂಡ್‌ ತಂಡಗಳನ್ನು ಎದುರಿಸುತ್ತಿದೆ.

ಹಿಂದಿನ ಕೂಟಗಳಲ್ಲಿ ಇದ್ದಂತೆ ಈ ಸಲ ಕೂಡಾ ಭಾರತಕ್ಕೆ ಆಸ್ಟ್ರೇಲಿಯದ ಸವಾಲು ದೊಡ್ಡದಾಗಿಯೇ ಇದೆ. ವೇಲ್ಸ್‌ ತಂಡವನ್ನು ಮಣಿಸಿ ಶುಭಾರಂಭ ಮಾಡಿರುವ ಭಾರತಕ್ಕೆ ಚಿನ್ನದ ಪದಕ ಗೆಲ್ಲಬೇಕಾದರೆ ಕಠಿಣ ಪರಿಶ್ರಮ ನಡೆಸುವುದು ಅಗತ್ಯ.

2010ರ ಕಾಮನ್‌ವೆಲ್ತ್‌ ಕೂಟದ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯ ಎದುರು ಹೀನಾಯ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಪ್ರಸಕ್ತ ಭಾರತ ತಂಡದಲ್ಲಿ ಕರ್ನಾಟಕದ ವಿ.ಆರ್‌.ರಘುನಾಥ್‌, ಎಸ್‌.ವಿ.ಸುನಿಲ್‌, ನಿಖಿನ್‌ ತಿಮ್ಮಯ್ಯ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.