ಹೋದ ವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಕಬಡ್ಡಿ ಲೀಗ್ನ ಪಂದ್ಯಗಳು ಜನಮನ ಸೂರೆಗೊಂಡವು. ಅಭಿಮಾನಿಗಳ ಸಂಭ್ರಮ, ಸಂತೋಷಕ್ಕೆ ಕಬಡ್ಡಿ ಹಬ್ಬ ವೇದಿಕೆಯಾಯಿತು. ಬಾಣ ಬಿರುಸುಗಳ ಚಿತ್ತಾರ, ಲೇಸರ್ ಬೆಳಕಿನ ಸೊಗಸು ಖುಷಿಯನ್ನು ಹೆಚ್ಚಿಸಿತು.
ತಮ್ಮ ನೆಚ್ಚಿನ ತಂಡ ಗೆಲ್ಲಲೆಂದು ಪಂದ್ಯದುದ್ದಕ್ಕೂ ಹಾರೈಸಿದ ಕಬಡ್ಡಿ ಪ್ರೇಮಿಗಳು ಸಂಭ್ರಮದ ಅಲೆಯಲ್ಲಿ ಮಿಂದೆದ್ದರು. ನಾಲ್ಕು ದಿನಗಳಲ್ಲಿ ಒಟ್ಟು ಏಳು ಪಂದ್ಯಗಳು ನಡೆದವು. ಜೈಪುರ ಪಿಂಕ್ ಪ್ಯಾಂಥರ್ಸ್ ಮಾಲೀಕ ಅಭಿಷೇಕ್ ಬಚ್ಚನ್ ಸೇರಿದಂತೆ ಅನೇಕ ತಾರೆಯರು ಉದ್ಯಾನನಗರಿಯ ಈ ಸಡಗರಕ್ಕೆ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.