ಅದು ಪರ್ಚಂಡಿ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಮಾತು ಆರಂಭಿಸಿದ ಸಿನಿಮಾ ನಿರ್ಮಾಪಕ ಕೆ.ಸಿ. ಶಿವಾನಂದ್, 'ನಲವತ್ತು ವರ್ಷಗಳ ಹಿಂದಿನ ಗ್ರಾಮೀಣ ಪ್ರದೇಶಗಳ ಜನರ ಜೀವನ, ಉಡುಗೆ, ಉದ್ಯೋಗ ಹಾಗೂ ಇತರ ಸಂಗತಿಗಳ ಬಗ್ಗೆ ವಿಸ್ತಾರವಾಗಿ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ. ಇಂದಿನ ಜನರಿಗೆ ತಮ್ಮ ಹಿಂದಿನವರ ವೃತ್ತಿ ಬಗ್ಗೆ ಅರಿವು ಮೂಡಿಸುವ ಯತ್ನವನ್ನೂ ಮಾಡಲಾಗಿದೆ' ಎಂದು ಹೇಳಿದರು.
ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದ ಮಹೇಶ್ ದೇವ್ ಅವರು ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ತೀರ್ಥಹಳ್ಳಿಯ ಹುಡುಗಿ ಕಲ್ಪನಾ ನಾಯಕ ನಟಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ ನಾಯಕಿ ಹಠಕ್ಕೆ ಬಿದ್ದು ಪ್ರೀತಿಸಿ, ಆ ನಂತರ ಮೂಡುವ ಭಾವನೆಗಳಿಂದಾಗಿ ಏನಾಗುತ್ತದೆ ಎಂಬುದನ್ನು ಸಿನಿಮಾ ನೋಡಿ ಅರಿಯಬೇಕು ಎಂದು ಹೇಳಿದರು ಮೊದಲಬಾರಿ ನಿರ್ದೇಶನ ಮಾಡಿರುವ ಜೂಮ್ ರವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.