ಮಲಯಾಳಂ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ಸಂಗೀತಗಾರನಾಗಿ ಛಾಪು ಮೂಡಿಸಿರುವ ವಿನೀತ್ ಶ್ರೀನಿವಾಸನ್ ಇತ್ತೀಚಿನ ‘ಪೂಮರಂ’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ.
‘ಮಾಲಿವುಡ್ನ ಮುಖ್ಯವಾಹಿನಿಯ ಯಾವುದೇ ಚಿತ್ರಕ್ಕಿಂತ ಭಿನ್ನವಾಗಿ ತನ್ನದೇ ಆದ ಮಾರ್ಗವನ್ನು ನಿರ್ಮಿಸಿಕೊಂಡಿದೆ ‘ಪೂಮರಂ’. ಇತ್ತೀಚಿನ ದಿನಗಳಲ್ಲಿ ನಾನು ಅತಿ ಹೆಚ್ಚು ಶ್ರದ್ಧೆಯಿಂದ ಆಲಿಸಿದ ಹಾಡುಗಳೆಂದರೆ, ‘ಪೂಮರಂ’ ಚಿತ್ರದ್ದು. ಮುಖ್ಯವಾಹಿನಿಯ ಚಿತ್ರಗಳ ಪರಿಕಲ್ಪನೆಗಳನ್ನು ಮೀರಿನಿಂತ ಚಿತ್ರವೊಂದರ ಬಗ್ಗೆ ಬೇರೆ ಬೇರೆ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ’ ಎಂದು ವಿನೀತ್ ಹೇಳಿದ್ದಾರೆ. ಚಿತ್ರದಲ್ಲಿ, ಕಾಳಿದಾಸ್ ಜಯರಾಮ್ ನಾಯಕನಾಗಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.