ADVERTISEMENT

ವೀಣೆ ರಾಜಾರಾವ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2015, 19:30 IST
Last Updated 22 ನವೆಂಬರ್ 2015, 19:30 IST

ಗಾನಕಲಾಭೂಷಣ ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನವು ಮೈಸೂರು ವೀಣಾ ಪರಂಪರೆಯ ಪ್ರಸಿದ್ಧ ಕಲಾವಿದ ವೀಣೆ ರಾಜಾರಾವ್ ಅವರ ಹೆಸರಿನಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ನವೆಂಬರ್‌ 23) ನಡೆಯಲಿದೆ.

ಹಿರಿಯ ವಿದುಷಿ ಮತ್ತು ಸಂಗೀತ ಬೋಧಕಿ ಪ್ರೊ. ರಾಜಲಕ್ಷ್ಮೀ ತಿರುನಾರಾಯಣನ್ ಅವರಿಗೆ ಇಸ್ರೋದ ಹಿಂದಿನ ಅಧ್ಯಕ್ಷ ಮತ್ತು ಖ್ಯಾತ ಸಂಗೀತಗಾರ ಡಾ. ಕೆ. ರಾಧಾಕೃಷ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಭಿನಂದನೆ: ವಿದುಷಿ ಗೀತಾ ರಮಾನಂದ್. ಉಪಸ್ಥಿತಿ: ವಿದುಷಿ ವೀಣಾ ಕಿನ್ಹಾಳ್.

ನಂತರ ಸಂಗೀತ ಕಾರ್ಯಕ್ರಮ. ವೀಣೆ: ಡಾ. ಸುಮಾ ಸುಧೀಂದ್ರ, ವೇಣು: ಎಲ್.ವಿ. ಮುಕುಂದ್, ವಯಲಿನ್: ನಳಿನಾ ಮೋಹನ್, ಮೃದಂಗ: ಬಿ.ಸಿ. ಮಂಜುನಾಥ್, ಘಟ: ಎಸ್.ಎನ್. ನಾರಾಯಣಮೂರ್ತಿ.

ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ. ಕಾಲೇಜು, 3 ನೇ ಬ್ಲಾಕ್, ಜಯನಗರ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.