ADVERTISEMENT

ಸಂಕ್ರಾಂತಿ ಸಂತಸ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST
ರಶ್ಮಿ ಪ್ರಶಾಂತ್‌
ರಶ್ಮಿ ಪ್ರಶಾಂತ್‌   

ಸಂಕ್ರಾಂತಿ ಎಂದಾಕ್ಷಣ ಸುಮಾರು 35 ವರ್ಷಗಳ ಹಿಂದಿನ ದಿನಗಳು ನನ್ನ ನೆನಪಿಗೆ ಬರುತ್ತವೆ. ಹಬ್ಬಕ್ಕೆ ವಾರ ಮೊದಲೇ ತಯಾರಿ ಶುರುವಾಗುತ್ತಿತ್ತು. ಎಳ್ಳು-ಬೆಲ್ಲದ ಮಿಶ್ರಣ ಹಾಗೂ ಸಕ್ಕರೆ ಅಚ್ಚನ್ನು ಮಾಡುವುದು ದೊಡ್ಡ ಸಂಭ್ರಮ. ದೊಡ್ಡವರಿಗೆ ಕಾಣದಂತೆ ಅದನ್ನು ಕದ್ದು ತಿನ್ನುವ ಆಸೆ. ನಂತರ ಅವರಿಂದ ಬೈಗುಳ.

ಮುತ್ತೈದೆಯರಿಂದ ಈ ಋತುವಿನ ಬೆಳೆಗಳಾದ ಅವರೆಕಾಯಿ, ಕಡಲೆಕಾಯಿ, ಎಲಚಿ ಹಣ್ಣು, ಗೆಣಸು, ಸಿಹಿಗುಂಬಳ ಹಾಗೂ ಇತರೆ ಹಣ್ಣುಗಳನ್ನೊಳಗೊಂಡ ಬಾಗಿನ ಸಮರ್ಪಣೆ. ಹಬ್ಬದ ದಿನ ಮನೆಗಳ ಮುಂದೆ ರಂಗುರಂಗಿನ ರಂಗವಲ್ಲಿಯ ಚಿತ್ತಾರ. ದೇವರಿಗೆ ಎಳ್ಳು, ಸಕ್ಕರೆ  ಅಚ್ಚು, ಕಬ್ಬು ಹಾಗೂ ರುಚಿಯಾದ ಸಿಹಿ ಪೊಂಗಲಿನ ನೈವೇದ್ಯ.

ಹೊಸ ಉಡುಗೆ ತೊಟ್ಟು ಒಂದು ಬುಟ್ಟಿಯಲ್ಲಿ ಎಳ್ಳುಬೆಲ್ಲದ ಪೊಟ್ಟಣಗಳು, ಸಕ್ಕರೆ ಅಚ್ಚು, ಕಬ್ಬು ಹಾಗೂ ಹಣ್ಣು ಇವೆಲ್ಲವನ್ನೂ ಹಿಡಿದು ಅಕ್ಕಂದಿರ ಜೊತೆ ಪರಿಚಯದ ಮನೆಗಳಿಗೂ ಹೋಗಿ ಎಳ್ಳು ಬೀರಿ ಬರುತ್ತಿದ್ದೆ. ಈ ಸಂತಸ ಇಂದು ಕೇವಲ ಕಾಡುವ ನೆನಪು.
-ರಶ್ಮಿ ಪ್ರಶಾಂತ್, ಅಶೋಕನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.