ADVERTISEMENT

ಅಗ್ನಿ ಆಕಸ್ಮಿಕ: ರಾಜಧಾನಿ ಎಕ್ಸ್‌ಪ್ರಸ್‌ನ 6 ಬೋಗಿ ಭಸ್ಮ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2015, 9:08 IST
Last Updated 21 ಏಪ್ರಿಲ್ 2015, 9:08 IST

ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ನಿಂತಿದ್ದ ಭುವನೇಶ್ವರ್‌ ರಾಜಧಾನಿ ಎಕ್ಸ್‌ಪ್ರಸ್‌ ರೈಲಿಗೆ ಆಕಸ್ಮಿಕವಾಗಿ  ಬೆಂಕಿ ತಗುಲಿದ್ದು, ಘಟನೆಯಲ್ಲಿ ಆರು ಬೋಗಿಗಳು ಸುಟ್ಟು ಭಸ್ಮವಾಗಿದೆ.

ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ರೈಲು ಬೋಗಿಯೊಳಗೆ ಪ್ರಯಾಣಿಕರು ಇರಲಿಲ್ಲ ಹೀಗಾಗಿ ಯಾವುದೇ ಜೀವಹಾನಿ   ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.