ADVERTISEMENT

ಅಡುಗೆಯವನಿಂದ ಹೊಲಿಗೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಬುಲಂದ್‌ಷಹರ್‌(ಉ.ಪ್ರ)(ಪಿಟಿಐ): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖ­ಲಾಗಿದ್ದ ರೋಗಿಗೆ ಅಡುಗೆಯವನೇ ಹೊಲಿಗೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.

ಬುಲಂದ್‌ ಷಹರ್‌ ಜಿಲ್ಲೆಯ ಪಹಸು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಡುಗೆಯವನು ಹಾಗೂ ವಾರ್ಡ್‌ ಬಾಯ್ ಇಬ್ಬರೂ ಸೇರಿ ರೋಗಿಗೆ ಹೊಲಿಗೆ ಹಾಕಿದ್ದಾರೆ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹಿರಿಯ ವೈದ್ಯಕೀಯ ಅಧಿಕಾರಿ ದೀಪಕ್‌ ಒಹ್ರಿ ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ­­ದಲ್ಲಿರುವ ವೈದ್ಯರನ್ನು ಅಮಾ­ನತು ಮಾಡುವಂತೆ ದೀಪಕ್‌ ಅವರು ಶಿಫಾರಸು ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.