ಕೋಲ್ಕತ್ತ (ಐಎಎನ್ಎಸ್): ತನ್ನ ಮೇಲೆ ಅತ್ಯಾಚಾರ ನಡೆಸಿದ ಯುವಕನನ್ನು ಕ್ಷಮಿಸುವಂತೆ ಆದೇಶಿಸಿದ ಗ್ರಾಮ ನ್ಯಾಯ ಪಂಚಾಯ್ತಿಯ ಕ್ರಮದಿಂದ ಬೇಸತ್ತ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮಬಂಗಾಳದ ಮಾಲ್ಡಾದ ಮಾಣಿಕ್ಚಾಕ್ ಪ್ರದೇಶದಲ್ಲಿ ಗುರುವಾರ ನಡೆದಿದೆ.
ಎರಡು ಮಕ್ಕಳ ತಾಯಿಯ ಮೇಲೆ ಆಕೆ ಗಂಡ ಮನೆಯಲ್ಲಿಲ್ಲದ ಸಂದರ್ಭದಲ್ಲಿ ರವೀಂದ್ರ ಮಂಡಲ್ ಎಂಬ ಯುವಕ ಅತ್ಯಾಚಾರ ನಡೆಸಿದ್ದನು. ಆಕೆಯ ಗಂಡ ಗ್ರಾಮ ನ್ಯಾಯ ಪಂಚಾಯತಿಯಲ್ಲಿ ಯುವಕನಿಗೆ ಸರಿಯಾದ ಶಿಕ್ಷೆ ನೀಡುವಂತೆ ಕೋರಿದ್ದರು.
ಆದರೆ ಪಂಚಾಯ್ತಿ, ಪೊಲೀಸರಿಗೆ ದೂರು ನೀಡದೇ, ಯುವಕನನ್ನು ಕ್ಷಮಿಸುವಂತೆ ಅತ್ಯಾಚಾರ ಸಂತ್ರಸ್ತೆಗೆ ತಿಳಿಸಿದ್ದರು.
ಇದರಿಂದ ಮನನೊಂದ ಮಹಿಳೆ ತನ್ನ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.