ADVERTISEMENT

ಅಸ್ಸಾಂ ಪ್ರವಾಹ: ಜನ ಸಂಕಷ್ಟದಲ್ಲಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ಗುವಾಹಟಿ (ಪಿಟಿಐ): ಬ್ರಹ್ಮಪುತ್ರ ನದಿ ಪ್ರವಾಹದಿಂದಾಗಿ ಅಸ್ಸಾಂನ ಲಖಿಂಪುರ, ದರಾಂಗ್‌, ಸೋನಿತ್‌ಪುರ  ಹಾಗೂ ಉದಲ್‌ಗುರಿ ಜಿಲ್ಲೆಗಳಲ್ಲಿ 25 ಸಾವಿರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದರಾಂಗ್‌ನಲ್ಲಿ ನಾಲ್ಕು ಹಾಗೂ ಸೋನಿತ್‌ಪುರದಲ್ಲಿ ಒಂದು ಪರಿಹಾರ ಶಿಬಿರ ತೆರೆ­ಯಲಾಗಿದೆ. 9,500ಕ್ಕೂ ಹೆಚ್ಚು ಮಂದಿ ಈ ಶಿಬಿರಗಳಲ್ಲಿ ಆಶ್ರಯ ಪಡೆದು­ಕೊಂಡಿದ್ದಾರೆ. 

ನುಮಲಿಗಡದಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿ­ಯು­ತ್ತಿದೆ.

ಸೋನಿತ್‌ಪುರದಲ್ಲಿ  ಬ್ರಹ್ಮಪುತ್ರ ನದಿಯ ಉಪನದಿ ಜೈಭಾರಲಿ ಅಪಾಯದ ಮಟ್ಟಕ್ಕಿಂತ ಮೇಲೆ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.