ADVERTISEMENT

ಆದೇಶ ಬಂದರೆ ದೆಹಲಿ ವಿಧಾನಸಭೆಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ನವದೆಹಲಿ: ದೆಹಲಿ ವಿಧಾನಸಭೆಗೆ ಮರು ಚುನಾ­ವಣೆ ನಡೆ­ಸಲು ಆದೇಶಿಸಿದರೆ ಅದಕ್ಕೆ ಸಿದ್ಧ­ವಿರುವುದಾಗಿ ಚುನಾವಣಾ ಆಯೋಗ ಹೇಳಿದೆ. ಒಂದು ವೇಳೆ ದೆಹಲಿ ವಿಧಾನಸಭೆ ವಿಸರ್ಜನೆಯಾದಲ್ಲಿ ಅಲ್ಲಿನ ಮೂರು ಕ್ಷೇತ್ರಗಳ ಉಪಚುನಾವಣೆಗೆ ಹೊರಡಿಸಿರುವ ಅಧಿಸೂಚನೆಯನ್ನು ಆಯೋಗ ವಾಪಸ್‌ ಪಡೆಯುತ್ತದೆ.

‘ವಿಧಾನಸಭೆ ವಿಸರ್ಜನೆ­ಯಾಗಬಹುದು ಎಂದು ಆಯೋಗ ಎದುರು ನೋಡುತ್ತಿತ್ತು. ಆದರೆ ಇನ್ನೂ ಕಾಯುವುದಕ್ಕೆ ಸಾಧ್ಯವಿಲ್ಲ. ತೆರವಾದ ಸ್ಥಾನಗಳಿಗೆ  ಆರು ತಿಂಗಳೊಳಗೆ ಚುನಾ­ವಣೆ ನಡೆಸುವುದು ಆಯೋಗದ ಜವಾ­ಬ್ದಾರಿ’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌.ಸಂಪತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.