ADVERTISEMENT

ಆರ್‌ಬಿಐ ಗವರ್ನರ್‌ಗೆ ಸಂಸತ್‌ ಸಮಿತಿ ಬುಲಾವ್

ಪಿಟಿಐ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ನವದೆಹಲಿ: ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯು ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್ ಅವರನ್ನು ಮತ್ತೊಮ್ಮೆ ಕರೆಯಿಸಲು ನಿರ್ಧರಿಸಿದೆ.
 
 ನೋಟು ರದ್ದು ನಿರ್ಧಾರದ ನಂತರ `500 ಮತ್ತು `1000 ಮುಖಬೆಲೆಯ ಎಷ್ಟು ನೋಟುಗಳು ವಾಪಸ್ ಆಗಿವೆ ಮತ್ತು ನೋಟು ರದ್ದತಿಯ ನಂತರದ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯಲು ಪಟೇಲ್ ಅವರನ್ನು ಸಮಿತಿ ಎದುರು ಕರೆಯಿಸಲಾಗುತ್ತಿದೆ.
 
ವೀರಪ್ಪ ಮೊಯಿಲಿ ಅಧ್ಯಕ್ಷತೆಯ ಹಣಕಾಸು ಸ್ಥಾಯಿ ಸಮಿತಿ ಏಪ್ರಿಲ್ 20ರಂದು ಸಭೆ ಸೇರುವ ಸಾಧ್ಯತೆ ಇದೆ. ಉರ್ಜಿತ್‌ ಅವರಲ್ಲದೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ್ ದಾಸ್, ಹಣಕಾಸು ಸೇವೆಗಳ ಕಾರ್ಯದರ್ಶಿ ಅಂಜುಲಿ ಚಿಬ್ ದುಗ್ಗಲ್ ಅವರಿಗೂ ಸಮಿತಿಯ ಎದುರು ಹಾಜರಾಗುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.