ಠಾಣೆ, ಮಹಾರಾಷ್ಟ್ರ (ಪಿಟಿಐ): ಬದ್ಲಾಪುರ್ ಜಿಲ್ಲೆಯ ಲಂಗಾವ್ ಗ್ರಾಮದಲ್ಲಿರುವ ಧಾರ್ಮಿಕ ಗುರು ರತ್ನಾಕರ ಮಹಾರಾಜ್ ಅವರ ಆಶ್ರಮಕ್ಕೆ ನುಗ್ಗಿದ ಎನ್ಸಿಪಿಯ ಪಾಲಿಕೆ ಸದಸ್ಯ ಮತ್ತು ಬೆಂಬಲಿಗರು ದಾಂಧಲೆ ನಡೆಸಿ ಒಂದು ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎನ್ಪಿಯ ಪಾಲಿಕೆ ಸದಸ್ಯ ಆಶೀಶ್ ದಾಮ್ಲೆ ನೇತೃತ್ವದಲ್ಲಿ ದಾಳಿ ನಡೆಸಿದ ಸುಮಾರು 20ರಿಂದ 25 ಮಂದಿಯ ತಂಡ ಆಶ್ರಮದ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್ಸಿಪಿಯಿಂದ ದಾಮ್ಲೆ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ವಕ್ತಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.