ADVERTISEMENT

ಇತಿಹಾಸ ನಿರ್ಮಾಣದತ್ತ...

ಮಂಗಳನ ಕಕ್ಷೆ ನೌಕೆ ಸೇರಿಸಲು ಅಂತಿಮ ಕಸರತ್ತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 19:30 IST
Last Updated 23 ಸೆಪ್ಟೆಂಬರ್ 2014, 19:30 IST

ಬೆಂಗಳೂರು (ಐಎಎನ್‌ಎಸ್‌/ಪಿಟಿಐ): ಭಾರತವು ಅನ್ಯಗ್ರಹ ಯಾನದಲ್ಲಿ ಇತಿ­ಹಾಸ ಬರೆಯಲು ಉಳಿದಿರುವುದು ಇನ್ನೊಂದೇ ಹೆಜ್ಜೆಯಷ್ಟೆ. ಹೌದು, ಬಾಕಿ ಇರುವುದು ಒಂದೇ ಹೆಜ್ಜೆ. ಆದರೆ ಅದು ಅತ್ಯಂತ ಮಹತ್ವದ ಹೆಜ್ಜೆ! ಭಾರತವಷ್ಟೇ ಏಕೆ, ಇಡೀ ಜಗತ್ತಿನ ಕೋಟ್ಯಂತರ ಜನರ ನಿರೀಕ್ಷೆ, ಕುತೂಹಲ, ಆತಂಕಗಳೆಲ್ಲಾ ಮಡುವುಗಟ್ಟಿರುವ ಹೆಜ್ಜೆ ಅದು!

ಎಲ್ಲಾ ಅಂದುಕೊಂಡಂತೆ ನಡೆದರೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೊ’ ಉಡಾಯಿಸಿರುವ ಮಂಗಳ­­ನೌಕೆ ಬುಧವಾರ (ಸೆ.೨೪) ಬೆಳಿಗ್ಗೆ ೭.೫೩ರ ಸುಮಾರಿಗೆ ಕೆಂಪು­ಕಾಯದ ಕಕ್ಷೆಗೆ ಸೇರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.