ADVERTISEMENT

ಉತ್ತರಾಖಂಡದ ‘ಬಾಹುಬಲಿ’ ಹರೀಶ್‌ ರಾವತ್‌!?

ಬಾಹುಬಲಿ 3!

ಏಜೆನ್ಸೀಸ್
Published 3 ಫೆಬ್ರುವರಿ 2017, 3:29 IST
Last Updated 3 ಫೆಬ್ರುವರಿ 2017, 3:29 IST
ಉತ್ತರಾಖಂಡದ ‘ಬಾಹುಬಲಿ’ ಹರೀಶ್‌ ರಾವತ್‌!?
ಉತ್ತರಾಖಂಡದ ‘ಬಾಹುಬಲಿ’ ಹರೀಶ್‌ ರಾವತ್‌!?   

ಡೆಹ್ರಾಡೂನ್‌: ಪಂಚರಾಜ್ಯಗಳ ಚುನಾವಣೆ ಸಮಯದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರನ್ನು ‘ಬಾಹುಬಲಿ’ಯಾಗಿಸಿರುವ ವಿಡಿಯೊ ಒಂದು ವೈರಲ್‌ ಆಗಿದೆ.

‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್‌ ಶಿವಲಿಂಗವನ್ನು ಎತ್ತುವಂತೆ ಈ ವಿಡಿಯೊದಲ್ಲಿ ರಾವತ್‌ ಉತ್ತಾರಖಂಡ ರಾಜ್ಯವನ್ನೇ ಎತ್ತಿಕೊಂಡು ಸಾಗುತ್ತಾರೆ! ಇತರ ರಾಜಕೀಯ ಮುಖಂಡರು ಈ ದೃಶ್ಯವನ್ನು ಆಶ್ಚರ್ಯದಿಂದ ನೋಡುತ್ತಾರೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೂ ಇಲ್ಲಿ ಪಾತ್ರಧಾರಿಗಳಾಗಿದ್ದಾರೆ. ಉತ್ತರಾಖಂಡ ರಾಜ್ಯವನ್ನೇ ಹರೀಶ್‌ ರಾವತ್‌ ತಮ್ಮ ಹೆಗಲ ಮೇಲೆ ಹೊತ್ತು ಸಾಗುವುದನ್ನು ಅಮಿತ್‌ ಶಾ ಮತ್ತು ಮೋದಿ ಬೆರಗುಗಣ್ಣಿಂದ ನೋಡುತ್ತಾರೆ.

ADVERTISEMENT

ಹರೀಶ್‌ ರಾವತ್‌ ಉತ್ತರಾಖಂಡದ ರಕ್ಷಕ ಎಂಬಂತೆ ಬಿಂಬಿಸಿರುವ ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಉತ್ತರಾಖಂಡ ವಿಧಾನಸಭೆಗೆ ಇದೇ 15ರಂದು ಮತದಾನ ನಡೆಯಲಿದೆ. ಚುನಾವಣೆ ಸಮಯದಲ್ಲಿ ಈ ವಿಡಿಯೊ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.