ADVERTISEMENT

ಉದಯಪುರ ಸಮೀಪ ಯಾತ್ರಿಕರಿದ್ದ ಬಸ್‌ ಅಪಘಾತ: 9 ಮಂದಿ ಸಾವು

ಏಜೆನ್ಸೀಸ್
Published 22 ಜುಲೈ 2017, 9:37 IST
Last Updated 22 ಜುಲೈ 2017, 9:37 IST
ಉದಯಪುರ ಸಮೀಪ ಯಾತ್ರಿಕರಿದ್ದ ಬಸ್‌  ಅಪಘಾತ: 9 ಮಂದಿ ಸಾವು
ಉದಯಪುರ ಸಮೀಪ ಯಾತ್ರಿಕರಿದ್ದ ಬಸ್‌ ಅಪಘಾತ: 9 ಮಂದಿ ಸಾವು   

ಜೈಪುರ: ಪುಣ್ಯಕ್ಷೇತ್ರಗಳಿಗೆ ‍‍ಪ್ರಯಾಣಿಸುತ್ತಿದ್ದ ಯಾತ್ರಿಕರ ಬಸ್‌ ಉದಯಪುರದ ನೆಹ್ಲಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದೆ. ಈ ವೇಳೆ ಆರು ಮಹಿಳೆಯರು ಸೇರಿದಂತೆ 9 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ.

ಗುಜರಾತ್‌ನ ಉದಯಪುರ ಬಳಿ ತಿರುವು ತೆಗೆದುಕೊಳ್ಳುವಾಗ ದ್ವಿಚಕ್ರ ವಾಹನವೊಂದು ಅಡ್ಡ ಬಂದಿದೆ. ಅನಾಹುತ ತಪ್ಪಿಸುವ ಬರದಲ್ಲಿ ಬಸ್‌ ಅಪಘಾತಕ್ಕೀಡಾಗಿದೆ ಎಂದು ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಹರಿದ್ವಾರ, ಪುಷ್ಕರ ಸೇರಿದಂತೆ 16 ದಿನಗಳು ಪುಣ್ಯಕ್ಷೇತ್ರಗಳ ಪ್ರವಾಸಕ್ಕಾಗಿ  ಶುಕ್ರವಾರ ರಾತ್ರಿ ಅಹಮದಾಬಾದ್‌ನಿಂದ ಪ್ರಯಾಣ ಹೊರಟಿದ್ದರು.

ADVERTISEMENT

ಈ ದುರಂತದಲ್ಲಿ 45 ವರ್ಷ ಮೇಲ್ಪಟ್ಟ ಆರು ಮಹಿಳೆಯರು ಮತ್ತು ಮೂವರು ಪುರುಷರು ಸಾವಿಗೀಡಾಗಿದ್ದಾರೆ. ಗಾಯಗೊಂಡವರನ್ನು ಉದಯಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.