ಗುರುವಾಯೂರು(ಪಿಟಿಐ): ಇಲ್ಲಿನ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನದ ಸುತ್ತಮುತ್ತಲಿನ ಬದುಕನ್ನು ತಮ್ಮ ಕಾದಂಬರಿ ಹಾಗೂ ಕತೆಗಳಲ್ಲಿ ಹಿಡಿದಿಟ್ಟ ಹಿರಿಯ ಮಲೆಯಾಳಂ ಕಾದಂಬರಿಕಾರ, ಲೇಖಕ ಉನ್ನಿಕೃಷ್ಣನ್ ಪುದೂರ್್(81) ಬುಧವಾರ ನಿಧನರಾದರು.
ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿರುವ ಉನ್ನಿಕೃಷ್ಣನ್ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗಾಗಿ ಚಾವಕ್ಕಾಡ್ನ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು.
ಇವರು ತನ್ನ ಪ್ರಸಿದ್ಧ ಕಾದಂಬರಿಗಳಾದ ‘ಬಲಿಕಲ್ಲ್’ ಹಾಗೂ ‘ಅನಪ್ಪಗ’ದಲ್ಲಿ ಗುರುವಾಯೂರು ದೇವಾಲಯದಲ್ಲಿ ಪರಿಚಾರಕ ವೃತ್ತಿ ನಡೆಸುವ ಆನೆ ಮಾವುತರು ಮತ್ತಿತರ ಕಾರ್ಮಿಕರ ಸಂಕಟಗಳನ್ನು ಅನಾವರಣಗೊಳಿಸದ್ದಾರೆ. ಉನ್ನಿಕೃಷ್ಣನ್ ಅವರು ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲದೇ ದೇವಾಲಯದ ಕೆಲಸಗಾರರ ಸಂಘಟನೆ ಕಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.