ADVERTISEMENT

ಉಪಚುನಾವಣೆಯಲ್ಲಿ ಯಾರಿಗೂ ನನ್ನ ಬೆಂಬಲವಿಲ್ಲ: ಸೂಪರ್‌ಸ್ಟಾರ್‌ ರಜನಿಕಾಂತ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 10:08 IST
Last Updated 23 ಮಾರ್ಚ್ 2017, 10:08 IST
ಉಪಚುನಾವಣೆಯಲ್ಲಿ ಯಾರಿಗೂ ನನ್ನ ಬೆಂಬಲವಿಲ್ಲ: ಸೂಪರ್‌ಸ್ಟಾರ್‌ ರಜನಿಕಾಂತ್‌
ಉಪಚುನಾವಣೆಯಲ್ಲಿ ಯಾರಿಗೂ ನನ್ನ ಬೆಂಬಲವಿಲ್ಲ: ಸೂಪರ್‌ಸ್ಟಾರ್‌ ರಜನಿಕಾಂತ್‌   

ಚೆನ್ನೈ: ಏಪ್ರಿಲ್‌ 12ರಂದು ತಮಿಳುನಾಡಿನಲ್ಲಿ ಉಪಚುನಾವಣೆ ನಡೆಯಲಿದ್ದು, ‘ಮುಂಬರುವ ಚುನಾವಣೆಯಲ್ಲಿ ನನ್ನ ಬೆಂಬಲ ಯಾರಿಗೂ ಇಲ್ಲ’ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಟ್ವೀಟ್‌ ಮಾಡಿದ್ದಾರೆ.

ಎಐಎಡಿಂಎಕೆ ಎರಡು ಪಕ್ಷಗಳಾಗಿ ಇಬ್ಬಾಗೊಂಡು ಹೊಸ ಚಿಹ್ನೆ ಮತ್ತು ಹೆಸರು ಪಡೆದುಕೊಂಡಿದ್ದು, ಉಪಚುನಾವಣಾ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿಸಿಕೊಂಡಿವೆ.

ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರ್‌.ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಏ.12ರಂದು ಉಪಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ರಜನಿಕಾಂತ್‌ ಯಾರಿಗೂ ಬೆಂಬಲವಿಲ್ಲ ಎನ್ನುವ ಮೂಲಕ ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.