ADVERTISEMENT

ಕಳಂಕಿತ ಐಎಎಸ್ ಅಧಿಕಾರಿಗಳ ಅಮಾನತು ರದ್ದು

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST

ಮುಂಬೈ (ಪಿಟಿಐ): ಆದರ್ಶ ಗೃಹ ನಿರ್ಮಾಣ ಸಂಘದ ಹಗರಣದಲ್ಲಿ ಭಾಗಿಯಾಗಿದ್ದರು ಎಂಬ ಕಳಂಕ ಹೊತ್ತು ಎರಡು ವರ್ಷಗಳ ಹಿಂದೆ ಅಮಾನತುಗೊಂಡಿದ್ದ ಹಿರಿಯ ಐಎಎಸ್‌ ಅಧಿಕಾರಿಗಳಾದ ಜೈರಾಜ್‌ ಪಾಠಕ್ ಮತ್ತು ಪ್ರದೀಪ್ ವ್ಯಾಸ್ ಅವರ ಅಮಾನತನ್ನು ರದ್ದುಪಡಿಸಲಾಗಿದೆ.

ಈ ಅಧಿಕಾರಿಗಳನ್ನು ಸೂಕ್ತ ಹುದ್ದೆಯಲ್ಲಿ ನಿಯೋಜಿಸಲಾಗುವುದು ಹಾಗೂ ಅವರ ವಿರುದ್ಧದ ವಿಚಾರಣೆ ಮುಂದುವರಿಯಲಿದೆ ಎಂದು ಮುಖ್ಯ ಕಾರ್ಯದರ್ಶಿ ಜೆ. ಎಸ್. ಶಹಾರಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.