ADVERTISEMENT

ಕೇಂದ್ರದ ಪರಿಸರ ತಜ್ಞರ ಸಮಿತಿಗೆ ಆರ್‌. ವಾಸುದೇವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಕೇಂದ್ರದ ಪರಿಸರ ತಜ್ಞರ ಸಮಿತಿಗೆ ಆರ್‌. ವಾಸುದೇವ
ಕೇಂದ್ರದ ಪರಿಸರ ತಜ್ಞರ ಸಮಿತಿಗೆ ಆರ್‌. ವಾಸುದೇವ   

ಶಿರಸಿ: ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ನದಿ ಕಣಿವೆ ಜಲವಿದ್ಯುತ್ ಯೋಜನೆಗಳ ತಜ್ಞರ ಸಮಿತಿಯ ಸದಸ್ಯರಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಇಲ್ಲಿನ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಆರ್. ವಾಸುದೇವ ಅವರನ್ನು ನೇಮಿಸಲಾಗಿದೆ.

ಹೊಸದಾಗಿ ಪ್ರಾರಂಭಿಸುವ ನದಿ ಕಣಿವೆ ಜಲವಿದ್ಯುತ್ ಯೋಜನೆಗಳ ಸಾಧಕ–ಬಾಧಕಗಳ ಬಗ್ಗೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ನೀಡುವುದು ಸಮಿತಿಯ ಮುಖ್ಯ ಕಾರ್ಯ. ಇದರ ಅವಧಿ 3  ವರ್ಷ. ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ಈ ಗೌರವ ಸಂದಿದೆ ಎಂದು ಅರಣ್ಯ ಕಾಲೇಜಿನ ಡೀನ್ ಎಚ್‌. ಬಸಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.