ADVERTISEMENT

ಕೇಬಲ್‌ ಕಾರ್‌ ದುರಂತ: ಏಳು ಸಾವು

ಏಜೆನ್ಸೀಸ್
Published 25 ಜೂನ್ 2017, 18:41 IST
Last Updated 25 ಜೂನ್ 2017, 18:41 IST
ಕೇಬಲ್‌ ಕಾರ್‌ ದುರಂತ: ಏಳು  ಸಾವು
ಕೇಬಲ್‌ ಕಾರ್‌ ದುರಂತ: ಏಳು ಸಾವು   

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ  ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ ಕೇಬಲ್ ಕಾರ್ ಮೇಲೆ ಮರ ಬಿದ್ದು ದೆಹಲಿಯ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.

ಬಲವಾಗಿ ಗಾಳಿ ಬೀಸುತ್ತಿದ್ದರಿಂದ  ಗುಲ್ಮಾರ್ಗ್‌  ಗೊಂಡೊಲಾ ಮಾರ್ಗದಲ್ಲಿ ಕೇಬಲ್‌ಕಾರ್‌ ಮೇಲೆ ಬುಡ ಸಮೇತ ಮರಬಿದ್ದು, ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಐವರಲ್ಲಿ ನಾಲ್ಕು ಮಂದಿ ದೆಹಲಿ ಶಾಲಿಮಾರ್‌ ಬಾಗ್‌ನ ಒಂದೇ ಕುಟುಂಬಕ್ಕೆ ಸೇರಿದವರು. ಗುಲ್ಮಾರ್ಗ್ ಪ್ರದೇಶ ಟ್ರಕಿಂಗ್ ಮತ್ತು ಸ್ಕೀಯಿಂಗ್‌ಗೆ ಹೆಸರುವಾಸಿಯಾಗಿದೆ.

ADVERTISEMENT

ಸ್ಕೀಯಿಂಗ್ ಮಾಡಲು ಇಲ್ಲಿಗೆ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಬೆಟ್ಟದ ತುದಿ ತಲುಪುವುದಕ್ಕೆ ಕೇಬಲ್ ಕಾರ್ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.