ಮುಂಬೈ(ಐಎಎನ್ಎಸ್): ಭಾರತದ ಪ್ರಖ್ಯಾತ ಛಾಯಾಗ್ರಾಹಕ ಗೋಪಾಲ ಬೋಧೆ ನಿಧನರಾಗಿದ್ದಾರೆ. ಶನಿವಾರ ಬೆಳಿಗ್ಗೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಛಾಯಾಗ್ರಹಣದಲ್ಲಿ ನಿರತರಾಗಿದ್ದಾಗ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
66 ವರ್ಷದ ಬೋಧೆ ಅವರಿಗೆ ಪತ್ನಿ (ಸುಧಾ) ಮತ್ತು ಪುತ್ರ (ಕೌಸ್ತುಭ್) ಇದ್ದಾರೆ. ಗೋಪಾಲ ಅವರ ಮೃತದೇಹವನ್ನು ಭಾನುವಾರ ವಿಶೇಷ ವಿಮಾನದ ಮೂಲಕ ಬಾಂದ್ರಾದಲ್ಲಿನ ಅವರ ನಿವಾಸಕ್ಕೆ ತರಲಾಗುವುದು. ಅಂತ್ಯಕ್ರಿಯೆಯನ್ನೂ ಅದೇ ದಿನ ಸಂಜೆ ನಡೆಸುವ ನಿರೀಕ್ಷೆ ಇದೆ. ಸಾಂಗ್ಲಿ ಜಿಲ್ಲೆಯಲ್ಲಿ ಜನಿಸಿದ ಬೋಧೆ ತಮ್ಮ 10ನೇ ವಯಸ್ಸಿಗೆ ಕ್ಯಾಮೆರಾ ಹಿಡಿದಿದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.