ನವದೆಹಲಿ (ಪಿಟಿಐ): ಮಾದಕ ವಸ್ತು ಸಾಗಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತ ಪ್ರಜೆ ಗುರ್ದೀಪ್ ಸಿಂಗ್ ಅವರನ್ನು ಇಂಡೋನೇಷ್ಯಾ ಸರ್ಕಾರ ಗಲ್ಲಿಗೇರಿಸಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮಾದಕ ವಸ್ತುಗಳ ಸಾಗಾಣೆ ಮಾಡುತ್ತಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ಸರ್ಕಾರದ ಕಾನೂನಿನಂತೆ 48 ವರ್ಷದ ಗುರ್ದೀಪ್ ಸಿಂಗ್ ಎಂಬ ಭಾರತೀಯನನ್ನು ಜುಲೈ 28ರಂದು ಮರಣದಂಡನೆ ಶಿಕ್ಷೆಗೊಳಪಡಿಸಲಾಗುವುದು ಎಂಬ ಸುದ್ದಿ ಬಂದಿತ್ತು.
ಏತನ್ಮಧ್ಯೆ, ಆತನನ್ನು ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸುಷ್ಮಾ ಸ್ವರಾಜ್ ಆಶ್ವಾಸನೆಯನ್ನೂ ನೀಡಿದ್ದರು.
ನಿನ್ನೆ ರಾತ್ರಿ ಗುರ್ದೀಪ್ ಸಿಂಗ್ ಅವರನ್ನು ಗಲ್ಲಿಗೇರಿಸಿಲ್ಲ ಎಂದು ಇಂಡೋನೇಷ್ಯಾದಲ್ಲಿರುವ ಭಾರತದ ರಾಯಭಾರಿ ತಿಳಿಸಿದ್ದಾರೆ ಎಂದು ಶುಕ್ರವಾರ ಬೆಳಗ್ಗೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.