ADVERTISEMENT

ಗುರ್‍‍ಗಾಂವ್ ಜಲಾವೃತ; ಇದಕ್ಕೆಲ್ಲಾ ಕಾರಣ ಅರವಿಂದ ಕೇಜ್ರಿವಾಲ್ !

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 9:00 IST
Last Updated 29 ಜುಲೈ 2016, 9:00 IST
ಗುರ್‍‍ಗಾಂವ್ ಜಲಾವೃತ; ಇದಕ್ಕೆಲ್ಲಾ ಕಾರಣ ಅರವಿಂದ ಕೇಜ್ರಿವಾಲ್ !
ಗುರ್‍‍ಗಾಂವ್ ಜಲಾವೃತ; ಇದಕ್ಕೆಲ್ಲಾ ಕಾರಣ ಅರವಿಂದ ಕೇಜ್ರಿವಾಲ್ !   

ನವದೆಹಲಿ: ಸತತ ಏಳು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಹರ್ಯಾಣದ ಗುರ್‍‍ಗಾಂವ್ ಸಂಪೂರ್ಣ ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್ ನಲ್ಲಿ ವಾಹನ ಸವಾರರು ಚಡಪಡಿಸುವಂತಾಗಿದೆ.

ಗುರ್‍‍ಗಾಂವ್ ನೀರಲ್ಲಿ ಮುಳುಗಿ ಅಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿರುವ ಹೊತ್ತಲ್ಲಿ, ಈ ಅವ್ಯವಸ್ಥೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್  ಆರೋಪಿಸಿದ್ದಾರೆ.

ದೆಹಲಿಯ ಅಸಹಕಾರವೇ ಇದಕ್ಕೆಲ್ಲಾ ಕಾರಣ ಎಂದು ಖಟ್ಟರ್ ಟ್ವೀಟ್ ಮಾಡಿ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.