ನವದೆಹಲಿ (ಪಿಟಿಐ): ಲೋಕಸಭೆಯಲ್ಲಿ ಬುಧವಾರ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ಹಿಂದಿನ ಯುಪಿಎ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಲು ಮಾಡಿದ ಪದಪ್ರಯೋಗ ಆಕ್ಷೇಪಕ್ಕೆ ಕಾರಣವಾಯಿತು.
ಸುರೇಶ್ ಅಂಗಡಿ ಅವರು ಬಳಸಿದ ಪದ ‘ತೇಜೋವಧೆ’ ಮಾಡುವಂತಿದೆ ಹಾಗೂ ದೇಶಕ್ಕೆ ದ್ರೋಹ ಬಗೆಯುವಂತಿದೆ ಎಂದು ಕಾಂಗ್ರೆಸ್ನ ಯುವ ಸಂಸದ ಅಸ್ಸಾಂನ ಗೌರವ್ ಗೊಗೋಯ್ (32 ವರ್ಷ) ತಕರಾರು ತೆಗೆದರು.
ಸಭಾಧ್ಯಕ್ಷರ ಪೀಠದಲ್ಲಿದ್ದ ರತ್ನಾ ನಾಗ್ ಆ ಪದಗಳನ್ನು ಕಡತದಿಂದ ತೆಗೆದುಹಾಕಿದ್ದು ಕಾಂಗ್ರೆಸ್ ಸದಸ್ಯರ ಮೆಚ್ಚುಗೆಗೆ ಕಾರಣವಾಯಿತು.
ಕಾಂಗ್ರೆಸ್ನ ವಿಭಜಿಸಿ ಆಳುವ ನೀತಿಯ ಬಗ್ಗೆ ಪ್ರಸ್ತಾಪಿಸಿದ್ದಾಗಿ ಸುರೇಶ್ ಅಂಗಡಿ ಆನಂತರ ಸುದ್ದಿಸಂಸ್ಥೆಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.