ADVERTISEMENT

ಬಿಹಾರ: ದಲಿತ ಯವಕರಿಗೆ ಥಳಿತ

11 ಮಂದಿ ವಿರುದ್ಧ ಎಫ್‌ಐಆರ್, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 9:41 IST
Last Updated 23 ಜುಲೈ 2016, 9:41 IST

ಮುಜಾಫರ್‌ಪುರ್ (ಪಿಟಿಐ): ಬೈಕ್ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ಇಬ್ಬರು ದಲಿತ ಯುವಕರಿಗೆ ಥಳಿಸಿ ಅವರ ಬಾಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬಿಹಾರದ ಮುಜಾಫರ್‌ಪುರ್‌ದಲ್ಲಿ ನಡೆದಿದೆ.

ಮಥಿಯಾ ಗ್ರಾಮದ ರಾಜೀವ್ ಕುಮಾರ್ ಪಾಸ್ವಾನ್ ಮತ್ತು ಮುನ್ನಾ ಪಾಸ್ವಾನ್ ಹಲ್ಲೆಗೊಳಗಾದವರು. ಬಾಬುರಾಮ್ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.

ಘಟನೆ ಸಂಬಂಧ ರಾಜೀವ್ ಕುಮಾರ್ ಪಾಸ್ವಾನ್ ಅವರ ತಾಯಿ ದೂರು ನೀಡಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲೆ ನಡೆಸಿದ ಸುಮನ್ ಠಾಕೂರ್ ಮತ್ತು ಮಂಚನ್ ಠಾಕೂರ್ ಎಂಬುವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪಾರೊ ಠಾಣೆ ಪೊಲೀಸರು ಹೇಳಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT