ADVERTISEMENT

ಬೃಂದಾವನದಲ್ಲಿ ವಿಧವೆಯರಿಂದ ದೀಪಾವಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಬೃಂದಾವನ/ಉತ್ತರ ಪ್ರದೇಶ (ಪಿಟಿಐ): ನದಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶ­ದೊಂದಿಗೆ ಬೃಂದಾವನದಲ್ಲಿನ ವಿಧವೆ­ಯರು ಮಂಗಳವಾರ ಯಮುನಾ ನದಿಯಲ್ಲಿ ನೂರಾರು ಹಣತೆಗಳನ್ನು ತೇಲಿಬಿಡುವುದರ ಮೂಲಕ ಮೂರು ದಿನಗಳ ದೀಪಾವಳಿ ಸಂಭ್ರಮವನ್ನು ಸ್ವಾಗತಿಸಿದರು.

ಕೈಯಲ್ಲಿ ಬಣ್ಣದ ‘ದಿಯಾ’ (ಹಣತೆ) ಹಿಡಿದು ಭಕ್ತಿ ಗೀತೆಗಳನ್ನು ಹಾಡುತ್ತಾ ಅವರು ನದಿ ತೀರದತ್ತ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.