ADVERTISEMENT

ಮನೆ ಕೆಲಸದವಳ ಕೊಲೆ ಪ್ರಕರಣ: 5 ರಂದು ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ನವದೆಹಲಿ (ಪಿಟಿಐ): ಮನೆ ಕೆಲಸದವಳನ್ನು ಹತ್ಯೆ ಮಾಡಿದ ಆರೋಪ ಸಂಬಂಧ ಬಂಧನದಲ್ಲಿರುವ ಬಹುಜನ ಸಮಾಜ ಪಕ್ಷದ ಸಂಸದ ಧನಂಜಯ್‌ ಸಿಂಗ್‌ ಮತ್ತು  ಪತ್ನಿ ಜಾಗೃತಿ ಅವರ ಮೇಲಿನ ದೋಷಾರೋಪ ಕುರಿತು ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಲಿದೆ.

ಹೆಚ್ಚುವರಿ ಸೆಷನ್‌ ನ್ಯಾಯಾಧೀಶ ಅಮಿತ್ ಬನ್ಸಲ್‌ ಅವರು ಆದೇಶವನ್ನು ಜೂನ್‌ 3ಕ್ಕೆ ಕಾಯ್ದಿರಿಸಿದ್ದರು. ಆರೋಪ ಪಟ್ಟಿ ಇನ್ನೂ ಸಿದ್ಧವಾಗದ ಕಾರಣ ಅದನ್ನು ಜೂನ್‌ 5ಕ್ಕೆ ಮುಂದೂಡಿದ್ದಾರೆ.

ಮನೆ ಕೆಲಸಕ್ಕಿದ್ದ ಪಶ್ಚಿಮಬಂಗಾಳದ ರಾಖಿ ಭದ್ರಾ ಎಂಬ ಮಹಿಳೆ ಕೊಲೆ ಮಾಡಿದ ಆರೋಪ ಇವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.