ಮಂಡಿ (ಹಿಮಾಚಲಪ್ರದೇಶ), (ಪಿಟಿಐ): ಹಿಮಾಚಲಪ್ರದೇಶದ ಥಾಲೋಟ್ ಸಮೀಪ ಬಿಯಾಸ್ ನದಿಯಲ್ಲಿ ಕೊಚ್ಚಿ ಹೋದ ಹೈದರಾಬಾದ್ನ ವಿಎನ್ಆರ್ ಕಾಲೇಜಿನ 24 ವಿದ್ಯಾರ್ಥಿಗಳ ಪೈಕಿ ಇನ್ನೂ 19 ಮಂದಿಗಾಗಿ ಶೋಧ ನಡೆಯುತ್ತಿದೆ.
ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಐವರ ಶವ ಸೋಮವಾರ ಪತ್ತೆಯಾಗಿತ್ತು. ಲರ್ಜಿ ಜಲಾಶಯದಿಂದ ಏಕಾಏಕಿ ನೀರು ಬಿಟ್ಟ ಕಾರಣ ಭಾನುವಾರ ಈ ದುರಂತ ನಡೆದಿತ್ತು. ‘ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ (ಎನ್ಡಿಆರ್ಎಫ್) 84 ಸಿಬ್ಬಂದಿ ಹಾಗೂ 10 ಮುಳುಗು ತಜ್ಞರು ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ’ ಎಂದು ಎನ್ಡಿಆರ್ಎಫ್್ ಅಧಿಕಾರಿ ಜೈದೀಪ್್ ಸಿಂಗ್್ ತಿಳಿಸಿದ್ದಾರೆ.
ಪರಿಹಾರ: ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಹಿಮಾಚಲ ಪ್ರದೇಶ ಸರ್ಕಾರ ತಲಾ ₨ 1.50 ಲಕ್ಷ ಪರಿಹಾರ ಘೋಷಿಸಿದೆ.
ಹೈದರಾಬಾದ್ ವರದಿ: ದುರಂತದಲ್ಲಿ ಮೃತಪಟ್ಟ ಜಿ.ಐಶ್ವರ್ಯ ಅವರ ಅಂತ್ಯಕ್ರಿಯೆ ಸಿಕಂದರಾಬಾದ್ನಲ್ಲಿ ನಡೆಯಿತು. ಆಕೆಗೆ ಪರಿಚಯ ಇಲ್ಲದವರು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು.
ನವದೆಹಲಿ ವರದಿ: ಬಿಯಾಸ್್ ದುರಂತದಲ್ಲಿ ಮೃತಪಟ್ಟವರಿಗೆ ಸಂಸತ್ನಲ್ಲಿ ಮಂಗಳವಾರ ಸಂತಾಪ ಸೂಚಿಸಲಾಯಿತು. ‘ಈ ಘಟನೆಯಿಂದ ಇಡೀ ದೇಶಕ್ಕೆ ಆಘಾತವಾಗಿದೆ’ ಎಂದು ಲೋಕಸಭೆ ಸ್ಪೀಕರ್್ ಸುಮಿತ್ರಾ ಮಹಾಜನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.