ADVERTISEMENT

ಮೊದಲ ಅಧಿವೇಶನ; ಮುಂಡೆ ನಿಧನಕ್ಕೆ ಸಂತಾಪ

ಗುರುವಾರಕ್ಕೆ ಅಧಿವೇಶನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2014, 11:16 IST
Last Updated 4 ಜೂನ್ 2014, 11:16 IST

ನವದೆಹಲಿ(ಐಎಎನ್‌ಎಸ್‌): ಕೇಂದ್ರ ಸಚಿವ ಗೋಪಿನಾಥ ಮುಂಡೆ ಅವರ ನಿಧನದ ಕಹಿ ನೆನಪಿನ ಹಿನ್ನಲೆಯಲ್ಲಿ 16ನೇ ಲೋಕಸಭೆಯ ಮೊದಲ ಅಧಿವೇಶನ ಬುಧವಾರ ಆರಂಭವಾಯಿತು. ಮುಂಡೆ ಅವರ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಿದ ಬಳಿಕ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಇದಕ್ಕೂ ಮುನ್ನ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಹಂಗಾಮಿ ಸ್ಪೀಕರ್ ಕಮಲ್‌ನಾಥ್ ಅವರು ಮುಂಡೆ ನಿಧನಕ್ಕೆ ಸಂತಾಪ ಸೂಚಿಸಿದರು.ಬಳಿಕ, ಮಾತನಾಡಿದ ಅವರು ಸಂವಿಧಾನಾತ್ಮಕವಾಗಿ ಜನತೆ ನಮ್ಮನ್ನು ಆರಿಸಿದ್ದು, ದೇಶದ ಕ್ಷೇಮಾಭಿವೃದ್ಧಿಯ ಬಹುದೊಡ್ಡ ಜವಾಬ್ದಾರಿ ವಹಿಸಿದ್ದಾರೆ ಎಂದರು.

ನಂತರ ಕಾರ್ಯದರ್ಶಿ ಜನರಲ್ ಪಿ. ಶ್ರೀಧರನ್ ಅವರು 16ನೇ ಲೋಕಸಭೆಗೆ ಆಯ್ಕೆಯಾದ ನೂತನ ಸದಸ್ಯರುಗಳ ಪಟ್ಟಿಯನ್ನು ಸದನದಲ್ಲಿ ಮಂಡಿಸಿದರು. ಸದಸ್ಯರ ಒಪ್ಪಿಗೆ ಮೇರೆಗೆ ಸ್ಪೀಕರ್ ಅವರು ಪ್ರಮಾಣವಚನ ಬೋಧನೆಯನ್ನು ಗುರುವಾರಕ್ಕೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT