ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ಪ್ರಶಸ್ತಿ’ ಪ್ರಕಟಿಸಲಾಗಿದೆ. 68ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯದ ಒಟ್ಟು 7 ಸಾಧಕರು ಸೇರಿದಂತೆ ದೇಶದ 89 ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 7 ಜನರಿಗೆ ಪದ್ಮ ವಿಭೂಷಣ, 7 ಮಂದಿಗೆ ಪದ್ಮ ಭೂಷಣ ಹಾಗೂ 75 ಜನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದದಲ್ಲಿ ಅಸಾದಾರಣ ಕೊಡುಗೆ ನೀಡಿದ ರಾಜ್ಯದ ಪ್ರೊ.ಉಡುಪಿ ರಾಮಚಂದ್ರರಾವ್ ಅವರಿಗೆ ‘ಪದ್ಮವಿಭೂಷಣ’ ಸಂದಿದೆ.
ಆಯ್ಕೆಯಾಗಿರುವ ಕನ್ನಡಿಗರು:
ಪದ್ಮ ವಿಭೂಷಣ ಪ್ರಶಸ್ತಿ
* ಪ್ರೊ.ಉಡುಪಿ ರಾಮಚಂದ್ರ ರಾವ್(ಯು.ಆರ್.ರಾವ್)– ವಿಜ್ಞಾನ ಮತ್ತು ತಂತ್ರಜ್ಞಾನ
ಪದ್ಮ ಶ್ರೀ ಪ್ರಶಸ್ತಿ
* ಪ್ರೊ. ಜಿ.ವೆಂಕಟಸುಬ್ಬಯ್ಯ– ಸಾಹಿತ್ಯ
* ಭಾರತಿ ವಿಷ್ಣುವರ್ಧನ್– ಕಲೆ ಮತ್ತು ಸಿನಿಮಾ
* ಸುಕ್ರಿ ಬೊಮ್ಮಗೌಡ –ಕಲೆ ಮತ್ತು ಸಂಗೀತ
* ಶೇಖರ್ ನಾಯ್ಕ್ – ಕ್ರೀಡೆ
* ವಿಕಾಸ್ ಗೌಡ – ಕ್ರೀಡೆ
* ಗಿರೀಶ್ ಭಾರದ್ವಾಜ್– ಸಮಾಜ ಸೇವೆ
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.