ADVERTISEMENT

ವಿಪ್ಲವ್ ದೇವ್ ಪ್ರಮಾಣ ವಚನ ಸಮಾರಂಭದಲ್ಲಿ ಅಡ್ವಾಣಿ ಅವರನ್ನು ಕಡೆಗಣಿಸಿದ ಮೋದಿ?

ಏಜೆನ್ಸೀಸ್
Published 10 ಮಾರ್ಚ್ 2018, 10:11 IST
Last Updated 10 ಮಾರ್ಚ್ 2018, 10:11 IST
ವಿಡಿಯೊ ದೃಶ್ಯ  ಕೃಪೆ: ಎಎನ್‍ಐ
ವಿಡಿಯೊ ದೃಶ್ಯ ಕೃಪೆ: ಎಎನ್‍ಐ   

ಅಗರ್ತಲಾ: ತ್ರಿಪುರಾದ ಮುಖ್ಯಮಂತ್ರಿಯಾಗಿ ವಿಪ್ಲವ್‌ ಕುಮಾರ್‌ ದೇವ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ವೇದಿಕೆಯಲ್ಲಿದ್ದ ರಾಜನಾಥ್ ಸಿಂಗ್, ಎಲ್.ಕೆ ಅಡ್ವಾಣಿ ಎದ್ದು ನಿಂತು ನಮಸ್ಕರಿಸಿದ್ದರು. ರಾಜನಾಥ್ ಸಿಂಗ್ ಅವರಿಗೆ ನಮಸ್ಕರಿಸಿದ ಮೋದಿ, ಅಡ್ವಾಣಿ ಬಳಿ ಬಂದಾಗ ಅವರನ್ನು ಕಡೆಗಣಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಜನತಾಕಾ ರಿಪೋರ್ಟರ್ ಪತ್ರಿಕೆಯ ವರದಿ ಪ್ರಕಾರ ವಿಪ್ಲವ್ ದೇವ್ ಅವರು ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಬಿಜೆಪಿ ನೇತಾರರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮೊದಲಾದ ಗಣ್ಯರು ಭಾಗಿಯಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT