ನವದೆಹಲಿ: ವೀಸಾ ನೀಡುವ ವಿಷಯದಲ್ಲಿ ನೀವು ಪಕ್ಷಪಾತ ತೋರುತ್ತಿದ್ದೀರಿ ಎಂಬ ಆರೋಪಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಖಡಕ್ ಉತ್ತರ ನೀಡಿದ್ದಾರೆ.
ಶುಕ್ರವಾರ ಟ್ವಿಟರ್ನಲ್ಲಿ ಹಿಂದೂ ಜಾಗರಣ್ ಎಂಬ ಟ್ವಿಟರ್ ಖಾತೆ ಮಾಡಿದ ಟ್ವೀಟ್ನಲ್ಲಿ ಸುಷ್ಮಾ ವಿರುದ್ಧ ಆರೋಪ ಹೊರಿಸಲಾಗಿತ್ತು.
ಮೋದಿಯವರೇ, ಸುಷ್ಮಾ ಸ್ವರಾಜ್ ಅವರು ಮುಸ್ಲಿಂ ವೀಸಾ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತಿದ್ದಾರೆ. ಇತ್ತ ಇಂಡಿಯಾ ವೀಸಾ ಸಿಗಲು ಹಿಂದೂಗಳೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ತುಂಬಾ ಬೇಸರವಾಗಿದೆ ಎಂದು ಹಿಂದೂ ಜಾಗರಣ್ ಟ್ವೀಟ್ ಮಾಡಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.