ADVERTISEMENT

ಸಾವು ನಿಗೂಢವೂ ಅಲ್ಲ, ಷಡ್ಯಂತ್ರವೂ ಇಲ್ಲ

ಏಜೆನ್ಸೀಸ್
Published 7 ಫೆಬ್ರುವರಿ 2017, 11:58 IST
Last Updated 7 ಫೆಬ್ರುವರಿ 2017, 11:58 IST
ಸಾವು ನಿಗೂಢವೂ ಅಲ್ಲ, ಷಡ್ಯಂತ್ರವೂ ಇಲ್ಲ
ಸಾವು ನಿಗೂಢವೂ ಅಲ್ಲ, ಷಡ್ಯಂತ್ರವೂ ಇಲ್ಲ   

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ನಿಗೂಢವೂ ಅಲ್ಲ, ಅದರ ಹಿಂದೆ ಯಾವುದೇ ಷಡ್ಯಂತ್ರವೂ ಇಲ್ಲ ಎಂದು ಅವರಿಗೆ ಚಿಕಿತ್ಸೆ ನೀಡಿದ ಲಂಡನ್‌ನ ತಜ್ಞ ರಿಚರ್ಡ್‌ ಬೀಲ್‌ ಹೇಳಿದ್ದಾರೆ.

ರಕ್ತದ ಸೋಂಕಿನಿಂದಾಗಿ ಅಂಗಾಂಗಗಳಿಗೆ ಆದ ಹಾನಿಯೇ ಅವರ ಸಾವಿಗೆ ಕಾರಣ ಎಂದು ಬೀಲ್‌ ಸ್ಪಷ್ಟಪಡಿಸಿದ್ದಾರೆ.

ಜಯಲಲಿತಾ ಸಾವಿನ ಬಗ್ಗೆ ಜನರು ಹಲವು ಶಂಕೆಗಳನ್ನು ವ್ಯಕ್ತಪಡಿಸುತ್ತಿರುವುದರ ನಡುವೆಯೇ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.