ADVERTISEMENT

‘ವಿಳಂಬ ಬೇಡ, ನಿರ್ಧಾರ ಬೇಕು’

​ಪ್ರಜಾವಾಣಿ ವಾರ್ತೆ
Published 23 ಜೂನ್ 2014, 19:30 IST
Last Updated 23 ಜೂನ್ 2014, 19:30 IST

ನವದೆಹಲಿ (ಪಿಟಿಐ): ‘ವಿಳಂಬ ಬೇಡ, ನಿರ್ಧಾರ ಬೇಕು’ ಎಂಬುದು ಸರ್ಕಾರದ ಮಂತ್ರ. ವಾಣಿಜ್ಯೋದ್ಯ­ಮಕ್ಕೆ ಉತ್ತೇ­ಜನ ನೀಡುವುದು ಸರ್ಕಾ­­ರದ ಕೆಲಸವೇ ಹೊರತು, ತಡೆ­ಯೊ­ಡ್ಡು­ವು­ದಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇ­ಕರ್‌ ಹೇಳಿದರು.

ಭಾರತೀಯ ವಾಣಿಜ್ಯೋದ್ಯಮಿ­ಗಳ ಸಂಘ (ಅಸೋಚಾಂ) ಸೋಮ­ವಾರ ಏರ್ಪಡಿಸಿದ್ದ ಕಾರ್ಯಕ್ರಮ­ದಲ್ಲಿ ಸರ್ಕಾರ ಮತ್ತು ಉದ್ಯಮಗಳು ಸೇರಿ ಗ್ರಾಹಕರ ಕಲ್ಯಾಣಕ್ಕೆ ಶ್ರಮಿಸ­ಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.