ADVERTISEMENT

₹15 ನೀಡದ್ದಕ್ಕೆ ದಲಿತ ದಂಪತಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST

ಮೈನ್‌ಪುರಿ (ಉತ್ತರಪ್ರದೇಶ): ಮದ್ಯ ಕುಡಿಯಲು ₹15 ನೀಡದ ಕಾರಣ  ಮೇಲ್ಜಾತಿಯ ವ್ಯಕ್ತಿಯೊಬ್ಬ ದಲಿತ ದಂಪತಿಯನ್ನು ಕೊಡಲಿ ಯಿಂದ ಹತ್ಯೆ ಮಾಡಿದ ಘಟನೆ ಇಲ್ಲಿನ ಲಖಿಂಪುರ ಗ್ರಾಮದ ಕುರ್ರ ಪ್ರದೇಶದಲ್ಲಿ ನಡೆದಿದೆ. 

ಗುರುವಾರ ಬೆಳಿಗ್ಗೆ ಅಶೋಕ್‌ ಮಿಶ್ರಾ  ಎಂಬುವರು ₹15 ನೀಡಲು ನಿರಾಕರಿಸಿದ್ದಕ್ಕೆ ಭರತ್‌ ನಟ್‌(48) ಹಾಗೂ ಆತನ ಪತ್ನಿ ಮಮತಾರನ್ನು (45) ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾರೆ.  ಭತ್ತ ಪೈರು ನಾಟಿ ಮಾಡಲು ದಂಪತಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಬಹುದು ಎಂಬ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಆರೋಪಿ ಅಶೋಕ್‌ ಮೈನ್‌ಪುರಿಯಲ್ಲಿ ಕಿರಾಣಿ ಅಂಗಡಿ ಇಟ್ಟು ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಟ್‌ ಸಮುದಾಯದವರು ಅಲೆಮಾರಿಗಳಾಗಿದ್ದು, ಸಾಮಾನ್ಯ ವಾಗಿ ರಸ್ತೆ ಬದಿಯಲ್ಲಿಯೇ ಮಲಗು ತ್ತಾರೆ. ಹಗ್ಗಕುಣಿತ, ಜಾದು ಇತ್ಯಾದಿಗಳು ಇವರ ಸಾಂಪ್ರದಾ ಯಿಕ  ಕಸುಬುಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.