ನವದೆಹಲಿ (ಪಿಟಿಐ): ಜಾರ್ಖಂಡ್ನಲ್ಲಿ ಎರಡು ಯುರೇನಿಯಂ ಗಣಿಗಳು ಸೆಪ್ಟೆಂಬರ್ನಿಂದ ಸ್ಥಗಿತಗೊಂಡಿರುವುದ ರಿಂದ 86 ಕೋಟಿ ಯುನಿಟ್ ವಿದ್ಯುತ್ ಉತ್ಪಾದಿಸಲು ಸಾಕಾಗುತ್ತಿದ್ದ 19 ಟನ್ಗೂ ಅಧಿಕ ಪರಮಾಣು ಇಂಧನ ಖೋತಾ ಆಗಿದೆ ಎಂದು ಪರಮಾಣು ಶಕ್ತಿ ಇಲಾಖೆಯ (ಡಿಎಇ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂರೈಕೆ ಮತ್ತು ಬೇಡಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ ಇತರೆ ಗಣಿಗಳಿಂದ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಗಣಿಗಳಲ್ಲಿ ದೊರಕುತ್ತಿರುವ ಕಡಿಮೆ ಗುಣಮಟ್ಟದ ಅದಿರಿನಿಂದಾಗಿ ಉತ್ಪಾದನಾ ನಷ್ಟ ಮತ್ತಷ್ಟು ಹೆಚ್ಚಳವಾಗಿದೆ. ಜಾರ್ಖಂಡ್ನಲ್ಲಿರುವ ಮೌಲ್ಡಿಹ್, ನರ್ವಾಪಹರ್, ತುರ್ಮುದಿಹ್, ಬಂಧುರಂಗ ಮತ್ತು ಬಗ್ಜಾತಾಗಳಲ್ಲಿನ ಗಣಿಗಳಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಡಿಎಇ ಅಡಿಯಲ್ಲಿ ಜಾಡುಗುಡ ಮತ್ತು ಭಾಟಿನ್ಗಳಲ್ಲಿ ಭಾರತೀಯ ಯುರೇನಿಯಂ ಕಾರ್ಪೊರೇಷನ್ ನಡೆಸುತ್ತಿದ್ದ ಯುರೇನಿಯಂ ಅದಿರು ಗಣಿಗಾರಿಕೆ ಸೆಪ್ಟೆಂಬರ್ನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.