ADVERTISEMENT

2019ರೊಳಗೆ ರಾಮಮಂದಿರ ಪೂರ್ಣ: ಸಾಕ್ಷಿ ಮಹಾರಾಜ್‌

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಉನ್ನಾವೊ(ಉತ್ತರ ಪ್ರದೇಶ) (ಪಿಟಿಐ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿಯೇ ತೀರುತ್ತದೆ. ಲೋಕಸಭೆ ಚುನಾವಣೆಗೂ ಮುನ್ನ 2019ರ ಒಳಗೆ ವೈಭವೋಪೇತವಾಗಿ  ರಾಮ ಮಂದಿರವನ್ನು ಕಟ್ಟಲಾಗುತ್ತದೆ ಎಂದು ಸಂಸದ ಸಾಕ್ಷಿ ಮಹಾರಾಜ್‌ ಹೇಳುವ ಮೂಲ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

‘ಅಯೋಧ್ಯೆಯಲ್ಲಿ ರಾಮ ಮಂದಿರವಿತ್ತು. ಭವಿಷ್ಯದಲ್ಲೂ ಮಂದಿರ ಇರಲಿದೆ’ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.
‘ರಾಮಮಂದಿರ ನಿರ್ಮಾಣವಾಗು ವುದು ಬಿಜೆಪಿಯವರಿಗೆ ಬೇಕಿಲ್ಲ. ಅದು ನಮ್ಮಂತಹ ಸಾಧು ಸಂತರಿಗೆ ಬೇಕಿದೆ.

ರಾಮಮಂದಿರ ನಿರ್ಮಾಣ ಅಭಿಯಾನಕ್ಕೆ ಬೆಂಬಲ ನೀಡುವಂತೆ ನಾವು ಎಲ್ಲ ರಾಜಕೀಯ ಪಕ್ಷಗಳನ್ನು ವಿನಂತಿ ಮಾಡಿಕೊಂಡಿದ್ದೇವೆ. ಆದರೆ ಕೇವಲ ಬಿಜೆಪಿ ಬೆಂಬಲಿಸಿತು’ ಎಂದು ಉನ್ನಾವೊ ಸಂಸದರೂ ಆಗಿರುವ ಸಾಕ್ಷಿ ಮಹಾರಾಜ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.