ADVERTISEMENT

ಅಪಘಾತ: ಮದುವೆಗೆ ಹೊರಟಿದ್ದ ಐದು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:43 IST
Last Updated 21 ನವೆಂಬರ್ 2017, 6:43 IST
ಅಪಘಾತ: ಮದುವೆಗೆ ಹೊರಟಿದ್ದ ಐದು ಮಂದಿ ಸಾವು
ಅಪಘಾತ: ಮದುವೆಗೆ ಹೊರಟಿದ್ದ ಐದು ಮಂದಿ ಸಾವು   

ಕಲಬುರ್ಗಿ: ಕ್ರೂಸರ್ ಮತ್ತು ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿ ಸೊಲ್ಲಾಪುರದ ಐದು ಮಂದಿ ಮೃತಪಟ್ಟಿರುವ ಅವಘಡ ಬೀದರ್‌–ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದೆ.

ಮೃತರನ್ನು ಗಂಗಾಧರ ಶೀಲವಂತ (60), ಭೀಮಾಶಂಕರ ಶೀಲವಂತ (42), ಆನಂದ ಶೀಲವಂತ (32), ಪ್ರಜ್ವಲ್ (15), ಉಜ್ವಲ್ (12) ಎಂದು ಗುರುತಿಸಲಾಗಿದೆ. ಪ್ರಕಾಶ (65), ರೋಹಿತ್ (14), ನಾಗರಾಜ (15), ಮಹಾಂತೇಶ (30) ಗಾಯಗೊಂಡಿದ್ದಾರೆ.

ರಟಕಲ್ ರೇವಣಸಿದ್ದೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ ತಾಲ್ಲೂಕಿನ ಅವರಾದ(ಬಿ) ಬಳಿ ಈ ಅವಘಡವಾಗಿದೆ.

ADVERTISEMENT

ಗಾಯಗೊಂಡವರನ್ನು ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.