ADVERTISEMENT

‘ಕಲೆಯಿಂದ ಜೀವನ ಪರಿಪೂರ್ಣ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:28 IST
Last Updated 17 ನವೆಂಬರ್ 2017, 20:28 IST
ಧರ್ಮಸ್ಥಳದಲ್ಲಿ ಶುಕ್ರವಾರ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನಕ್ಕೆ ಬಂದ ಬಿ.ಆರ್‌. ಲಕ್ಷ್ಮಣರಾವ್‌, ಸುಧಾ ಮೂರ್ತಿ ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವೇದಿಕೆಗೆ ಕರೆತಂದರು –ಪ್ರಜಾವಾಣಿ ಚಿತ್ರ
ಧರ್ಮಸ್ಥಳದಲ್ಲಿ ಶುಕ್ರವಾರ ಲಕ್ಷದೀಪೋತ್ಸವ ಪ್ರಯುಕ್ತ ನಡೆದ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನಕ್ಕೆ ಬಂದ ಬಿ.ಆರ್‌. ಲಕ್ಷ್ಮಣರಾವ್‌, ಸುಧಾ ಮೂರ್ತಿ ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವೇದಿಕೆಗೆ ಕರೆತಂದರು –ಪ್ರಜಾವಾಣಿ ಚಿತ್ರ   

ಉಜಿರೆ: ‘ಸಾಹಿತ್ಯ, ಸಂಗೀತ, ಕಲೆಯಿಂದ ಜೀವನ ಪರಿಪೂರ್ಣವಾಗುತ್ತದೆ. ಶ್ರದ್ಧೆ, ನಿಷ್ಠೆಯಿಂದ ಕಷ್ಟಪಟ್ಟು ಕೆಲಸ ಮಾಡಿದರೆ ಇಷ್ಟಪಟ್ಟಿದ್ದನ್ನು ಪಡೆಯಬಹುದು. ಜೀವನಾನುಭವದಿಂದ ನಾವು ಉತ್ತಮ ಸಾಹಿತ್ಯ ರಚನೆ ಮಾಡಬಹುದು’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನ ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ‘ನಿಜ ಜೀವನದಲ್ಲಿ ಕೇಳಿದ, ನೋಡಿದ, ಅನುಭವಿಸಿದ ಘಟನೆಗಳನ್ನು ಮನನ ಮಾಡಿ, ಬರೆದರೆ ಸಾಹಿತ್ಯ ರೂಪುಗೊಳ್ಳುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಮಾತನಾಡಿ, ‘ಕಾವ್ಯ, ಕವಿತೆ ಒಂದು ವಿಸ್ಮಯ ಆಗಿದೆ. ತಾಳ್ಮೆ, ಪ್ರತಿಭೆ, ಶ್ರಮ ಮತ್ತು ಜೀವನಾನುಭವದಿಂದ ಕಾವ್ಯ ಹಾಗೂ ಕವಿತೆ ರಚನೆ ಮಾಡಲು ಸಾಧ್ಯವಾಗುತ್ತದೆ. ಕವಿತೆ ಹುಟ್ಟುವುದಿಲ್ಲ, ಸಂಭವಿಸುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.