ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಮುಚ್ಚಿಹಾಕಲು ಕಾಂಗ್ರೆಸ್ ವ್ಯವಸ್ಥಿತ ಕುತಂತ್ರ ಮಾಡುತ್ತಿದೆ. ಇಂತಹ ಕೃತ್ಯ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ದೂರಿದರು.
ತಮ್ಮ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗೌಡರ ಪತ್ನಿ ಮಲ್ಲಮ್ಮ ಅವರ ಬಾಯಿ ಮುಚ್ಚಿಸುವ ಮೂಲಕ ಪ್ರಕರಣ ಮುಚ್ಚಿ ಹೋಯಿತು ಎಂದು ಮುಖ್ಯಮಂತ್ರಿಗಳು ಬೀಗಬಾರದು. ಅವರ ತಾಯಿ ಮತ್ತು ಸಹೋದರ ಪ್ರಕರಣ ಮುಂದುವರಿಸುವ ಇಚ್ಛೆ ಹೊಂದಿದ್ದು, ಅವರೊಂದಿಗೆ ಬಿಜೆಪಿ ಸಿಬಿಐಗೆ ಒತ್ತಾಯಿಸಿ ಹೋರಾಟ ನಡೆಸಲಿದೆ’ ಎಂದರು.
ಪ್ರಕರಣ ನಡೆದು ಒಂದು ವರ್ಷದ ಬಳಿಕ ಒಂದಷ್ಟು ವಿಚಾರಗಳು ಹೊರಬಂದಿವೆ. ಮಲ್ಲಮ್ಮ ತನ್ನ ಭಾವನ ವಿರುದ್ಧ ಹೇಳಿಕೆ ನೀಡಿದ ಬಳಿಕ ಮತ್ತಷ್ಟು ವಿಚಾರಗಳು ಹೊರಗೆ ಬರಲಿವೆ ಎಂದು ತಿಳಿಸಿದರು.
(62ನೇ ಜನ್ಮದಿನದ ನಿಮಿತ್ತ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಉಚಿತ ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಹುಬ್ಬಳ್ಳಿಯಲ್ಲಿ ಹಣ್ಣುವಿತರಿಸಿದರು. ಶಿಲ್ಪಾ ಶೆಟ್ಟರ್ ಇದ್ದಾರೆ.)
ಮಲ್ಲಮ್ಮ ಅವರನ್ನು ಬಿಜೆಪಿ ಯಾವತ್ತೂ ಬಲವಂತವಾಗಿ ಹೋರಾಟಕ್ಕೆ ಎಳೆ ತಂದಿರಲಿಲ್ಲ. ಈಗಲೂ ಅವರ ನಿಲುವನ್ನು ಗೌರವಿಸುತ್ತೇವೆ ಎಂದು ಶೆಟ್ಟರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.