ಕಾರವಾರ: ಕದಂಬ ನೌಕಾನೆಲೆಯ ವೀಕ್ಷಣೆಗೆ 157 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ನಾಲ್ಕು ಐರಾವತ ಬಸ್ಗಳಲ್ಲಿ ಬಂದಿದ್ದಾರೆ.
ಕಾರವಾರದ ಅರಗಾ ಸೀಬರ್ಡ್ ಪ್ರವೇಶದ್ವಾರ ಪ್ರವೇಶಿಸುವ ವೇಳೆ ಬಸ್ಸಿನಲ್ಲಿ ಕುಳಿತ ಜನಪ್ರತಿನಿಧಿಗಳು ಮಾಧ್ಯಮದವರ ಕ್ಯಾಮೆರಾಗಳತ್ತ ಕೈಬೀಸಿದರು.
ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಿದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಇಲ್ಲಿನ ಕದಂಬ ನೌಕಾನೆಲೆಯ ವೀಕ್ಷಣೆಗೆ ತೆರಳುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.