ರಾಮನಗರ: ಕನಕಪುರ ತಾಲ್ಲೂಕು ಹಾರೋಹಳ್ಳಿ ಹೋಬಳಿಯ ಕಣಿವೆ ಮಾದಾಪುರ ಗ್ರಾಮದ ತಟ್ಟೆ ಕೆರೆಯಲ್ಲಿ ಭಾನುವಾರ ಬೆಳಿಗ್ಗೆ ನಾಯಿ ತೊಳೆಯುತ್ತಿದ್ದ ಮಧು (26) ಎಂಬುವರ ಮೇಲೆ ಮೊಸಳೆ ದಾಳಿ ನಡೆಸಿದೆ. ಮೊಸಳೆ ದಾಳಿಯಿಂದ ಮಧು ಅವರ ಎಡಗೈ ತುಂಡಾಗಿದೆ.
ತೀವ್ರ ರಕ್ತಸ್ರಾವಗೊಂಡ ಮಧು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಟ್ಟೆ ಕೆರೆ ಬನ್ನೇರುಘಟ್ಟ ಅರಣ್ಯ ಪ್ರದೇಶದ ಸಮೀಪದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.