ADVERTISEMENT

ಛೋಟಾ ಶಕೀಲ್‌ ಸಹಚರ ಸೇರಿದಂತೆ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮೇ 2017, 20:05 IST
Last Updated 24 ಮೇ 2017, 20:05 IST
ಬೆಳಗಾವಿ: ನಗರದ ವ್ಯಾಪಾರಿಯೊಬ್ಬರ ಪುತ್ರನನ್ನು ಅಪಹರಿಸಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಭೂಗತ ಪಾತಕಿ ರಶೀದ್‌ ಮಲಬಾರಿಯ ಸಹಚರ ಬಿಲಾಲ್ ಉಮರಖಾನ್‌ ಸೇರಿದಂತೆ ಇಬ್ಬರನ್ನು ಮುಂಬೈ ಹಾಗೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
 
ಶಾರ್ಪ್‌ ಶೂಟರ್‌ ಬಿಲಾಲ್‌, ಮುಂಬೈ ಭೂಗತ ಪಾತಕಿ ಛೋಟಾ ಶಕೀಲ್‌ ಗುಂಪಿನ ಸದಸ್ಯ. ಈತನನ್ನು ಮುಂಬೈನಲ್ಲಿ ಬಂಧಿಸಿದ ಪೊಲೀಸರು ಬುಧವಾರ ಬೆಳಿಗ್ಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು­ಪಡಿಸಿದ್ದು, ನ್ಯಾಯಾಲಯ ಒಂದು ವಾರ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.